ಕೃಷಿಯನ್ನು ಉದ್ಯಮವಾಗಿ ಸಲು ತೋಟಗಾರಿಕೆ ಎಂಬ ಧ್ಯೇಯವಾಕ್ಯದೊಂದಿಗೆ ಈ ಮೇಳ ನಡೆಯಲಿದೆ.ವಸ್ತುಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಇಲ್ಲಿ ಇರಲಿದ್ದು ರೈತರಿಗೆ ಅವಶ್ಯಕವಾದ ಎಲ್ಲಾ ಮಾಹಿತಿಗಳನ್ನು ನೀಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದೇಶದ ಮೂಲೆಮೂಲೆಗಳಿಂದ ರೈತರು ಮೇಳಕ್ಕೆ ಆಗಮಿಸಲಿದ್ದು ಅನೇಕ ಪ್ರಯೋಜನೆಗಳು ಇದರಿಂದ ಲಭ್ಯವಿದೆ ಆದ ಕಾರಣ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೃಷಿ ಜಾಗರಣ ಪತ್ರಿಕೆ ಕೋರುತ್ತದೆ.